ನನ್ನ ಶ್ಯಾಮನ ಮಂದಹಾಸ

ನನ್ನ ಶ್ಯಾಮನ ಮಂದಹಾಸ ಮಿಂಚುವ ಮುಖ
ಕಾಡುವುದೆ ಸಖಿ ನನ್ನ ಇರುಳಿನಲ್ಲಿ,
ಕುಡಿನೋಟ ಚಿಮ್ಮುವಾ ಬಾಣಗಳು ಎದೆ ತಾಗಿ
ಹೊರಳುವೆನು ನಾ ಮಧುರ ನೋವಿನಲ್ಲಿ.

ಕರಯುವಳು ನನ್ನ ಸಖಿ “ಬಾರೆ ಮಿರಾ ಬಾರೆ
ಕಟ್ಟಲೇನೇ ಕೈಗೆ ತಾಯಿತವನು?
ಬೇರು ಮೂಲಿಕೆ ತಂದು ಔಷಧವ ಅರೆಯಲೇ
ವಾಸಿಮಾಡಲೆ ನಿನ್ನ ಬಾಧೆಯನ್ನು?”

ಮದ್ದು ತಾಯಿತಗಳಿಗೆ ಮಣಿವ ರೋಗವಿದಲ್ಲ,
ಮನವ ಹೊಕ್ಕಿದ ಹರಿಯ ಮಧುರ ರೂಪ;
ನನ್ನ ಉಳಿಸುವುದಿಗ ಒಂದೇ ಔಷಧ ಸಖೀ
ಹರಿಯ ಕಾಣದೆ ಮಾಯದನ್ನ ತಾಪ.

ಬಾ ಸಖೀ ಬಾ ನನ್ನ ಎದೆಯಿಣುಕಿ ನೋಡು,
ಕಂಡೀತು ನೂರುಚೂರಾದ ಹೃದಯ;
ಮನ್ಮಥನ ನಾಚಿಸುವ ಚೆಲುವನೇ ಗಿರಿಧರ,
ಹೇಗಿರಲೆ ದೂರವಿರೆ ಅಂಥ ಇನಿಯ?

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆಡಂಗುರ-೧೩೪
Next post ಭತ್ತದ ಸಿಪ್ಪೆ ಹೊಂಗೆ ಎಣ್ಣೆಯಿಂದ ವಿದ್ಯುತ್ ಉತ್ಪಾದನೆ

ಸಣ್ಣ ಕತೆ

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

cheap jordans|wholesale air max|wholesale jordans|wholesale jewelry|wholesale jerseys